Wednesday, May 21, 2014

Moksha praaptiya Guttu - Sri Brahmananda Maharaj

                                                     ಶ್ರೀ ರಾಮ ಸಮರ್ಥ 
                              ಸದ್ಗುರು ಶ್ರೀ  ಬ್ರಹ್ಮಾನಂದ ಮಹಾರಾಜರು ಹೇಳಿದ ಮೋಕ್ಷ ಪ್ರಾಪ್ತಿಯ ಗುಟ್ಟು
                                              ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜ್ ಕೀ ಜೈ 
  ಪರಮ ಪ್ರಾಪ್ತಿ, ಸದ್ಗತಿ ಆಗಬೇಕೆಂದು ಪೂರ್ಣ ಇಚ್ಛಾ - ಖರೆ ಇರಾದಾ ಇದ್ದವರು ಸದಾ ಸರ್ವದಾ ಅಖಂಡ ರಾಮನಾಮ ಸ್ಮರಣೆ ಮಾಡಬೇಕು . ಅಹೇತುಕ  ಅವ್ಯಭಿಚಾರಿಣಿ ಶ್ರೀ ರಾಮಭಕ್ತಿ ಮಾಡಿ ಕೃತಾರ್ಥ ರಾಗಬೇಕು . ಈ ಘೋರ ಕಲಿಯುಗದಲ್ಲಿ ಪಾರಾಗಬೇಕಾದರೆ ಭಗವದ್ಭಕ್ತಿ ರಾಮನಾಮ ಸ್ಮರಣ ದ ಹೊರತು  ಎರಡನೇ ಉಪಾಯವಾವುದೂ ಇಲ್ಲ .
ಆಯುಷ್ಯದ್ದು ಭರವಸೆ ಇಲ್ಲ . ಆದಷ್ಟು ತೀವ್ರವಾಗಿ ಕೃ ತಾರ್ಥ ರಾಗಲಿಕ್ಕೆ  ಪ್ರಯತ್ನ ಮಾಡಬೇಕು . ಪಾರಮಾರ್ಥಕ್ಕೆ ಮೊದಲ ಸಾಧನಾ ಸತ್ಸಂಗತಿ  ಸಾಧು ಸಂಗತಿಯಿಂದ ಎಷ್ಟೋ ಜನರು ಪಾರಾಗಿ ಹೋದರು  ಸಾಧು ಸಂಗತಿಯಿಂದ ಕ್ಷಮಾ , ಭೂತದಯಾ , ಶಾಂತಿ, ವೈರಾಗ್ಯ, ಸಮಾಧಾನ, ವಿವೇಕ, ಪ್ರವೃತ್ತಿ ಮಾರ್ಗದ ತ್ಯಾಗ, ನಿವೃತ್ತಿ ಮಾರ್ಗದ ಗಮನ ಇತ್ಯಾದಿ ಅನೇಕ ಸನ್ಮಾರ್ಗ ಗಳು ಪ್ರಯತ್ನ ಮಾಡದೆ ಲೇ ದೊರೆಯುತ್ತವೆ  ಕಾಮ-ಕ್ರೋಧಾದಿ ಷದ್ವೈ ರಿಗಳೂ , ಪಾರಮಾರ್ಥಕ್ಕೆ ವಿಘ್ನ ಮಾಡತಕ್ಕಂಥ ದಂಭ ಅಹಂಕಾ ರಾದಿ ಗಳೂ  ತಮ್ಮಷ್ಟಕ್ಕೆ ತಾವೇ ಲಯ ಹೊಂದುತ್ತವೆ ಸಾಧು ಸಂಗತಿ ಮಹಿಮಾ ಅಗಾಧವದೆ  ಸಾಧುಗಳಲ್ಲಿ ಸದೋದಿತ ಭಗವತ್ಚರ್ಚ , ಭಗವದ್ಗುಣಾನುವರ್ಣನ , ರಾಮನಾಮಸ್ಮರಣ , ಸದೋಪದೇಶ ಅಹೋ ರಾತ್ರಿ ನಡೆದಿರುತ್ತದೆ. ಅಲ್ಲಿ ವಾಸಮಾಡಿದವರಿಗೆ ಇದನ್ನೆಲ್ಲಾ ಕೇಳಿ ಕೇಳಿ ಪರಮಾತ್ಮನಲ್ಲಿ ತದಾಕಾರವೃತ್ತಿ ಆಗುತ್ತದೆ. ಪರಮಾತ್ಮನಲ್ಲಿ ವೃತ್ತಿ ಲಯವಾದರೆ ಜೀವನ್ಮುಕ್ತ ನಾಗುತ್ತಾನೆ

ವಿಷಯಾಕಾರ ವೃತ್ತಿ ಯಿಂದ ಬಂಧಾ, ಪರಮಾತ್ಮಾಕಾರ ವೃತ್ತಿ ಯಿಂದ ಮೋಕ್ಷಾ . ವೃತ್ತಿಗೆ ವಿಷಯದ ಸಂಭಂಧವಾಗದೆ ಇರಲಿಕ್ಕೆ ಸದೋದಿತ ಭಗವದನುಸಂಧಾನವೇ ಕಾರಣ.  ಕೂತಾಗ, ನಿಂತಾಗ, ಮಲಗಿದಾಗ, ಹೋಗೋವಾಗ, ಬರೋವಾಗ ಸದಾ ಸರ್ವದಾ ರಾಮಧ್ಯಾನ ಮಾಡುತ್ತಿರಬೇಕು. ರಾಮನಾಮ ಬಿಟ್ಟು ವಿಷಯದ ಕಡೆ ಹೋಗಲಿಕ್ಕೆ ವೃತ್ತಿಗೆ ಸವಡ  ಕೊಡಬಾರದು.

"ಹೇ ರಾಮಾ, ಹೇ ದಯಾನಿಧೇ ! ನನ್ನ ಎಂದು  ಉಧ್ಧಾರ ಮಾಡುವೆ? ನಿನ್ನ ಸಗುಣ ಮೂರ್ತಿ ಎಂದು ಕಂಡೇನು? ರಾಮಾ, ನಾನು ಅಗಾಧ ಪಾಪಿ ಇದ್ದೇನೆ. ನನ್ನಂಥ ಕೆಟ್ಟವರು ಜಗತ್ತಿನಲ್ಲಿ ಯಾರೂ ಇಲ್ಲ.  ಹೇ ದಯಾ ಸಮುದ್ರಾ , ರಾಮಾ , ತೀವ್ರವಾಗಿ ಭವ ಸಮುದ್ರವನ್ನು ದಾಟಿಸು.. ಸಂತತಿ, ಸಂಪತ್ತು ಮೊದಲಾದ ಐಹಿಕ ಪಾರತ್ರಿಕ ಸುಖವು ಏನೂ ಬೇಡ . ನಿನ್ನ ದೃಢ ಭಕ್ತಿ ಕೊಡು .ನನ್ನ ನಾಲಿಗೆಯಲ್ಲಿ ಸದಾ ರಾಮ (ನಿನ್ನ) ನಾಮವಿರಲಿ . ಕಿವಿಗಳು ರಾಮಾ , (ನಿನ್ನ) ಕಥಾ ಕೇಳಲಿ. ಕೈಗಳಿಂದ ರಾಮ (ನಿನ್ನ) ಪೂಜಾ ಸಂಮಾರ್ಜನಾದಿ  ಸೇವಾ  ಘಡಾಯಿಸಲಿ , ಪಾದಗಳಿಂದ ಪ್ರದಕ್ಷಿಣಾ ಘಡಾಯಿಸಲಿ. . ರಾಮಾ!  ನಾನು ಅಜ್ಞಾನಿ  ಇದ್ದೇನೆ.  ಏನೋ ತಿಳುವಳಿಕೆಯಿಲ್ಲ .ನೀನೇ ನನ್ನ ಹೃದಯದಲ್ಲಿ ನಿಂತು, ನಿನ್ನ ಪಾದದಲ್ಲಿ ಪ್ರೇಮ ಹುಟ್ಟುವಂತೆ ಮಾಡು. . ಶ್ರೀರಾಮಾ , ನಿನ್ನ ಹೊರತು ನನಗೆ ಯಾರೂ ಆಧಾರ ಇಲ್ಲ . ನೀನೆ ತಂದೆ, ತಾಯಿ, ಬಂಧು, ಬಳಗಾ, . ಹೇ ಕೃಪಾಸಾಗರಾ!  ಶ್ರೀ ರಾಮಾ! ಅಜ್ಞಾನಾಧ್ವಾಂತ  ನಿವಾರಣಾ , ನೀನೇ ಗತಿ ಎಂದು ಅನನ್ಯಭಾವದಿಂದ  ಶರಣು  ಹೋಗಬೇಕು.  ಸಹಸಾ  ಪಾಪಮಾರ್ಗದ ಕಡೆ ಪ್ರವೃತ್ತಿ ಇರಬಾರದು . ಸುಳ್ಳು ಕೆಲಸಕ್ಕೆ ಹೋಗಬಾರದು . ಜನರು ನಿಂದಾ -ಮಾಡಿದರೆ  ವಿಷಾದ ಪಡಬಾರದು . ಸ್ತುತಿ ಮಾಡಿದರೆ ಹರ್ಷ ಪಡಬಾರದು . ಜನರ ನಿಂದಾ-ಸ್ತುತಿ  ಮಾಡಬಾರದು . ಸರ್ವತ್ರದಲ್ಲಿ ಪರಮಾತ್ಮ ಇದ್ದಾನೆ..  ಹೆಂಡರು ಮಕ್ಕಳು, ಮನೆ, ಹೊಲಾ. ಸಂಪತ್ತು ಮೊದಲಾದ ದೃಶ್ಯ ಪದಾರ್ಥ ಮಿಥ್ಯಾ ಎಂದು ತಿಳಿಯಬೇಕು . ದೇವರು ಒಬ್ಬನೇ ಶಾಶ್ವತ. . ಅಹೋ ರಾತ್ರಿ ರಾಮಭಜನೆಯಲ್ಲೇ ಕಾಲ ಕ್ರಮಣ ಮಾಡಬೇಕು.
                                               ಜಯ ಜಯ ರಘುವೀರ ಸಮರ್ಥ